ವಿಷಯಕ್ಕೆ ಹೋಗಿ

ಕನಸು ,ಇಳಿಜಾರು , ಬೆಂಕಿ , ಹಬ್ಬ

ಕನಸು ಇಳಿಜಾರು ಬೆಂಕಿ ಹಬ್ಬ .

ರೆಕ್ಕೆ ಮೂಡದ ಪುಟ್ಟ ಕನಸಿನ ಮರಿಗಳಿಗೆ 
ಬೆಚ್ಚನೆ ಕಾವು ಕೊಟ್ಟು 
ಜಡಿ ಮಳೆಯಲಿ ತಾನು ಒದ್ದೆಯಾದ ಅಮ್ಮನಂತ  ಕವಿತೆ ಎದ್ದು ಬಂದಿತ್ತು .

ಈ ಕವಲು ಹಾದಿಯ ಇಳಿಜಾರಿನಲ್ಲೊಂದು 
ಕೈ ಆಸರೆ ಬಯಸಿ ಚಡಪಡಿಸಿ
  ಅಲೆಯಿರದ ಬದುಕನ್ನೂ ಹಬ್ಬವಾಗಿಸುವುದನ್ನು  ಕಲಿಸಿದ ಅವನಂತ ಕವಿತೆ ಮಾತಿಗೆ ಕೂತಿತ್ತು .

ಪ್ರತಿ ತಲ್ಲಣಕ್ಕೂ ಚಿತ್ತಾಗಿ
ಗಮ್ಯಕು ಗಮನವಿತ್ತು
ಗಮಕದಲಿ ಉತ್ತರಿಸಿ
ಕಣ್ಮುಚ್ಚಿ ಅರೆದೂರ ನಿಡುಸುಯ್ದು
ಕಣ್ಬಿಡದ ಆಸೆ ಕೂಸುಗಳ ಬೆಂಕಿಗೆಸೆದು
ಸಂತೆಯ ಒಡಲೊಳಗೆ ಕರಗಿ ಹೋಗುವ ನಿಶ್ಚಿಂತ ಸಂತ

ಉಳಿದದ್ದು
ಎದೆ ಬೇಗುದಿಗಳಿಗೆ ಕಿವುಡಾದ ಕವಿತೆ ಮಾತುಗಳ ಹುಡುಕಿ ಸುಸ್ತಾದ ಇವಳು ಅಷ್ಟೇ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...