ವಿಷಯಕ್ಕೆ ಹೋಗಿ

ಸೊಲ್ಲು

ಮುದ್ದು ಮನದ ಸಖಿಯ ಸೊಲ್ಲ
ಕೇಳಲೊಲ್ಲ ಯಾಕೋ ಗೊಲ್ಲ

ಆ ಬಿದಿರಿನ ಆಜನ್ಮ ಪುಣ್ಯ .
ನಿನ್ನ ನವಿರು ಬೆರಳಲಿ ವಿರಮಿಸಿದೆ
ಉಸಿರನಿತ್ತು ಕೊಳಲಾಗುವ ಪರಿ
ಜೀವ ತರಿಸಿದೆ ಕಲ್ಲೊಳಗೆ

ರಾಧೆಯಾಗುವ ತವಕದಿ ನಾನೂ‌
ನಿನ್ನ ಘಮದೊಳೆನ್ನ ಬೆರೆಸಿದೆ .
ಕಾದು ಕುದ್ದ ಹೃದಯದ
ಕಣ್ಣ ಹನಿಯ ಮಾಲೆ ಮಾಡಿ ನನ್ನ ಮುರಳಿಗದನು ತೊಡಿಸಿದೆ .

ಯಮುನೆ ತಟದ ಮರಳೂ ಕಾದಿದೆ ‌, ಗೊಲ್ಲನ ಸವಿಯುಲಿಗೆ
ಯಮುನೆ ರಾಧೆ ಬೇರೆಯಲ್ಲ
ಕಾದ ವಿರಹದ ಬೇಗೆಗೆ

ಮನದ ಕಡಲು ಮೇರೆ ಮೀರಿ
ಸುಪ್ತ ಭಾವ ನರ್ತನ
ರಾಧೆಯಾಗ ಬಂದ ನಾನು ಧಾರೆಯಾದ ತಲ್ಲಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...