ವಿಷಯಕ್ಕೆ ಹೋಗಿ

ಮನನ


ಈ ಹೆಜ್ಜೆ ಕೆಸರಿನ ಕವಲು ದಾರಿಯಲೀಗ ನನ್ನದೇ ಒಂಟಿ ಹೆಜ್ಜೆಯ ಹುಡುಕಾಟ  ಪಾದಕಂಟಿದ ಬಿಳಲುಗಳಿಗೆ ಬೇರಿನ ಕನವರಿಕೆ 

ನಾಭಿಯಿಂದೆದ್ದ ಸ್ವರಗಳ್ಯಾಕೊ ಕಿವಿಯ ಆಳವನು ತಲುಪುವಲ್ಲಿ ಸೋಲುತ್ತಾ ಮುಚ್ಚಿಟ್ಟ ಬೆರಳುಗಳ ಸಡಿಲಿಸಲು ಹೆಣಗುತಿದೆ ಕಾಲ 


 ನಿಲ್ಲುತಿಲ್ಲ ಆಲಾಪ ಸೊಲ್ಲ ಸವರುವ ನೆಪದ ತಂಗಾಳಿ ಸುಡುವುದನು ಬಿಟ್ಟಿಲ್ಲ .

ಎದೆಗತ್ತಲ ಕಿರುದಾರಿಯಲೀಗ ಮಿಂಚುಹುಳದ ಎಡವು ನಡಿಗೆ ಹನಿಬೆಳಕ ಸೋಕಿನಲಿ ಕವಿತೆಗಾಗಿ ತಡವರಿಸುವ ಎಳಸು ಕೈ ..

ಸುರಳಿಗುರುಳಲಿ ಜೋಲಿಯಾಡಿದ ಬದುಕು      ನೀಲ ಕಾವಳದ ಮುಸುಕು ಸರಿಸಿ ಬೆಚ್ಚಿ ಬಿದ್ದ ಅಕ್ಷರಗಳ ಹುಡುಕಿ ಹೊರಟ ಅಲೆಮಾರಿ 

ಖಾಲಿ ಪುಟಗಳ ರಾಶಿ ನಡುವೆ ನಿರಾಳ ವೈರುಧ್ಯ . ಇರುಳ ಚಂದ್ರನ ಕರುಳಗಾಯಕೆ ಕಣ್ಣೀರಿಟ್ಟ ಮುಗಿಲು 

ಬೊಗಸೆಯೊಳಗೆ ದಕ್ಕಿದ ಬೆಳದಿಂಗಳಲ್ಲೀಗ ಮೈ ಸುಟ್ಟ ಕಮಟು ‌... 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...