ವಿಷಯಕ್ಕೆ ಹೋಗಿ

ಬೆಳಕ ಜಾಡು

ಬೆಳಕ ಜಾಡು

ಕತ್ತಲ ಮರಿಹೂವನ್ನು ಆರಿಸುತ್ತಾ ಬಂದವಳು ಬೆಳಕ ಕವಲುದಾರಿಗೆ ಹೆದರಿದ ಎಳೆಗೆಂಪು ಹೂ

ಹಸಿರುಗತ್ತಲಲಿ ಸಾಗುವ ಆರು ಚಕ್ರದ ಆಮೆಗಾಲಿನ ನಡಿಗೆ ...
ಬೇರಿಗಿಳಿವ ನೋವಿನ ಹನಿಗಳೊಳಗೆ
ಗಾಯಗೊಂಡ ಗರಿಕೆ ಚಿಗುರು

ಮೌನ , ಮತ್ತು , ಬೆಳಕು
ಆಂತರ್ಯದ ಬಟ್ಟಲಿಗೆ ಸುರುವಿಕೊಂಡಷ್ಟೂ ಖಾಲಿಯಾಗುತ್ತಲೇ ಇದ್ದೇನೆ ...
ನನ್ನೊಳಗಿನ ಆ ನಾನೂ..

ಉರಿದೆಸೆದ ಪುಟ್ಟ. ಬೆಳಕ ಬೀಜಗಳೂ ಚಿಗುರೊಡೆವ ಸಂಭ್ರಮಕೆ  ತಾಯಾಗುತ್ತಾ
ಕತ್ತಲ ಮೊತ್ತವ ನನ್ನೊಳಗೇ ಇಳಿಸಿಕೊಳ್ಳಲು ಹೆಣಗಾಡುವ ನಾನು .

ಉಸಿರ ತೇಕುತ್ತಾ ಬಂದ ಚಂದ್ರ.
ಉರಿಸಿ ಹೋಗಿದ್ದಾನೆ ಹಲವು ಇರುಳ ... ತೆರೆದ ಎದೆಗಾಯಕೆ
ಮಾಯಕದ ಸುಳಿವು ಆಗೊಮ್ಮೆ ಈಗೊಮ್ಮೆ 

ನಿರಂತರ ಹುಡುಕಾಟ ಸುಳಿಬೆಳಕಿಗೂ , ಸುಮ್ಮನಿರಲು ಬಿಡದ ಅಂಬೆಗಾಲಿನ‌ ಆಸೆಗೂಸು , ಕನಸಿನ ಪಳೆಯುಳಿಕೆ ಜೊತೆಯಲಿ
ಮುಗಿಯದ ಮಾತುಕತೆ
ಮುಗ್ಗರಿಸಲು ಹೆಜ್ಜೆಗೊಂದು ಮೈಲಿಗಲ್ಲು 
ನಡುವೆ ದಾರಿ ಮರೆತು ಕೂತ ನಾನು ..

ಕಾವ್ಯ ಎಸ್ ಕೋಳಿವಾಡ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...