ವಿಷಯಕ್ಕೆ ಹೋಗಿ

ಮತ್ತೆ ಮೂಡಿದ ಸಾಲು.‌

ಎದೆಯೂರಿನ ದಾರಿಯಲಿ ತಿರುವುಗಳ ನಡುವೆ ಕಳೆದೇ ಹೋಗಿವೆ ಸಾವಿರ ಕನಸುಗಳು
ನಾನು ನಿನ್ನಂತೆ ಹುಡುಕುತ್ತಾ ಕೂರುವವಳಲ್ಲ
ಹೊಸ ಕನಸ ಬಿತ್ತುವವಳು

ನೀ ಬಿತ್ತುವ ಕನಸು ಚಿಗುರೊಡೆಯಲು ಇದೆಯಾ ಏನಾದರೂ ಕರಾರು
ಕಪ್ಪು ಹುಡುಗ ಈಗೀಗ ಗೋರಿ ಕಡೆಯವನು ಏನಕ್ಕೂ ತಯಾರು

ನನ್ನ ಮನಸಿನೂರಲಿ ಬೆಳಕಿಲ್ಲ ಬರಿಯ ಕತ್ತಲು , ಮಾತಿಲ್ಲ ಬರೀ ಮೌನ , ಎಷ್ಟು ದೂರ ಸಾಗಿದರೂ ಮುಗಿಯದ ಪಯಣ ನೀ ಚಿರಸಂಚಾರಿ

ಮೌನದ ಹೊಡೆತಕ್ಕೆ ಅಪಘಾತವಾದ ಒಂಟಿ ಹೃದಯಕ್ಕೆ
ನೀರೆರೆಚ ಬಂದವಳೋ ಅದೇ ಹಾದಿಯ ಬೀಡಿನವಳು
ಅಪರೂಪಕ್ಕೆ ಹೆಜ್ಜೆ ತಿರುಗಿಸಲೆಂದರೆ ಅದೇ ಕತ್ತಲೆಗೆ ದಾರಿ ತಪ್ಪುತ್ತದೆ

ಅವನು ಎದುರಿಗಿದ್ದ ಮೇಲೆ ಕಾರ್ಗತ್ತಲ ರಾತ್ರಿಯಂತ ಮನಸಿನಲು
ಕೋಟಿ ದೀವಟಿಗೆಯ ಚೆಂಬೆಳಕು
ಅವ ಅತ್ತ ಸರಿದರೆ ಒಂಟಿ ಕ್ಷಣದಲಿ
ದೀಪವಾರಿಸಿ ಬಿಡುವ ತಂಗಾಳಿ
ಯಾರ ದೂಷಿಸಲಿ ?

ಅವಳ ದ್ವಂದ್ವ ನಿಲುವು ಚಿತ್ತ ಹೊರಳಿಸೋ ಈವಾಗಿನ ಸಮಾಚಾರ
ಕವಲುದಾರಿಯತ್ತ ಹಲ್ಕಾ ಮನಸ್ಸು
ಉತ್ತರವಿರದ ಗೊಂದಲ ಪ್ರಶ್ನೆ ಮತ್ತು ಅವನು ಕಪ್ಪು ಹುಡುಗ

*ಕಾವ್ಯ ಜುಗಲ್ಬಂದಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...