ವಿಷಯಕ್ಕೆ ಹೋಗಿ

ಕಡಲು

ಬಾನಂಗಳದ ತುಂಬೆಲ್ಲ‌ ಯಾರೋ  ಚಿತ್ತಾರ ಬಿಡಿಸಿಟ್ಟರು
ಎವೆಯಿಕ್ಕದೆ ನೋಡಿ ಕಣ್ಣನೋಯಿಸಿಕೊಂಡೆನಷ್ಟೇ
ಒಮ್ಮೊಮ್ಮೆ ಬದುಕೂ ಕೂಡ ಖಾಲಿಯೆಂತೆನಿಸುವುದು
ಥೇಟು ನೀಲಿ ಬಾನಂತೆ.

ಬೆನ್ನ ಹುರಿಯ ನೋವಿಗೆ ಬೆಚ್ಚಗಿನ ಮಜ್ಜನವೊಂದಾಗಲೇಬೇಕು
ಮೈಸೆಡವಿಗೆ ಒಂದಷ್ಟು ಅತೃಪ್ತ ಸುಖ.
ನೆತ್ತಿಮೇಲಿನ ನೀರಿಗೆ ಪಾದ ನೋಡುವ ಹುರುಪಿದೆ
ನಡುವೆ ನಡೆವ ಸವರಿಕೆಗೆಲ್ಲ ಹಾದರದ ಮೆಲುಕೇ?.

ಜಗಜ್ಜಾಹಿರಾಗಲಿ ಎಲ್ಲವೂ
ಮುಚ್ಚಿಡುವುದೇನಿದೆ ಜಗದಿ
ನಾಲ್ಕು ಗೋಡೆಯೊಳಗಿನದ್ದು ಒಳಗೇ ಇರಲಿ
ಕೆಲವೊಂದು ಮಾತ್ರ  ಬಯಲಾಗದಿರಲಿ.

ಈಗಷ್ಟೇ ಯಾರೋ ಬೆನ್ನಿಗಂಟಿಕುಳಿತರು
ಬೆಚ್ಚಗಾಯಿತಷ್ಟೇ ದೇಹ ಒಂದೈದು ನಿಮಿಷ
ಮತ್ತದೇ ಖಾಲಿತನದ ಪರಮಾವಧಿ
ಮತ್ತೆ ತುಂಬಿಕೊಳಲು ಕಾಯಬೇಕು.

ಕಡಲು😍

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...