ನಾಯಿ ನೀಲಿಯಾದ ಕಥೆ
ಪ್ರಕೃತಿ ಎಲ್ಲವನೂ ಸಹಿಸ್ತಾಳೆ ಅಂತ ನಾವು ಹಾಳುಗೆಡುವುದರಲ್ಲಿ ನಿಸ್ಸೀಮರು. ಲಾಭದ ಆಸೆಗೆ ಅಳತೆ ಮೀರಿ ಕಾರ್ಖಾನೆಗಳಿಗೆ ಪರವಾನಗಿ ನೀಡುವ ಸರ್ಕಾರದ ಸಂಸ್ಥೆಗಳಿಗೆ ಮುಂದಾಗುವ ಪರಿಣಾಮಗಳ ಅರಿವಿಲ್ಲ . ಕಠಿಣ ಕಾನೂನುಗಳು ಬರಬೇಕಿದೆ.
ಈಗ ಹೇಳೋಕ್ ಹೊರಟಿರೋದು ಮುಂಬೈನ ಬೀದಿನಾಯಿಗಳು ನೀಲಿಯಾದ ಕಥೆಯನ್ನ.
ಮುಂಬೈನ ತಲೋಜಾ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಬೀದಿನಾಯಿಗಳು ನೀಲಿ ಬಣ್ಣಕ್ಕೆ ತಿರುಗಿವೆ. ತುಸು ಲಕ್ಷ್ಯ ಕೊಟ್ಟು ಕೇಳಿಸಿಕೊಳ್ಳಬೇಕಿದೆ..
ಈ ಕೈಗಾರಿಕಾ ಪ್ರದೇಶ ಒಂದರಲ್ಲೇ ಸಾವಿರಕ್ಕೂ ಅಧಿಕ ಔಷಧ ತಯಾರಿಕಾ ಕಂಪನಿಯ ಕಾರ್ಖಾನೆಗಳು , ಬಣ್ಣವನ್ನು ಉತ್ಪಾದಿಸೋ ಕಾರ್ಖಾನೆಗಳಿಗೆ ,ಕೆಮಿಕಲ್ ಕಾರ್ಖಾನೆಗಳಿಗೆ ಅವಕಾಶ ನೀಡಿದೆ . ಈ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಸೇರುವುದು ಅಲ್ಲಿಯೇ ಸಮೀಪದ ಕಸಾಡಿ ಎಂಬ ನದಿಗೆ .
ಈ ನದಿಗೆ ಕೈಗಾರಿಕೆಗಳಿಂದ ಬರುವ ಹಾನಿಕಾರಕ ಸೈನೈಡ್ , ಹೈಡ್ರೋಕಾರ್ಬನ್ , ಇಂಡಿಗೋ , ಆಂಥ್ರಾಕ್ವಿನೋನ್, ಸಲ್ಫರ್ , ನೈಟ್ರೋಜನ್ ಮುಂತಾದ ಆಸಿಡ್ ಡೈ ಗಳನ್ನು ಯಾವ ಶುದ್ಧಿಕರಣ ಇಲ್ಲದೇ ಬಿಡಲಾಗಿದೆ. ಜೊತೆ ಅತಿ ಹೆಚ್ಚು ಪ್ರಮಾಣದ ಕ್ಲೋರೈಡ್ ಆ ನೀರಿನಲ್ಲಿ ಕಂಡುಬಂದಿದೆ.
ಕಸರಾಡಿ ನದಿಯ ಬಯಾಲಜಿಕಲ್ ಆಕ್ಸಿಜನ್ ಡಿಮಾಂಡ್ ನ ಪ್ರಮಾಣ 80mg/l ಆಗಿದೆ . ಇದು ಅಪಾಯಕಾರಿ ಮಟ್ಟಕಿಂತ 14 ಪಟ್ಟು ಹೆಚ್ಚು .
BOD ಪ್ರಮಾಣ ಜಾಸ್ತಿಯಾದಷ್ಟೂ ಆ ನೀರಿನ ಮಾಲಿನ್ಯದ ಪ್ರಮಾಣವೂ ಹೆಚ್ಚಾಗುತ್ತದೆ. ಇಂತ ನೀರಿನಲ್ಲಿ ಯಾವ ಜಲಚರ ಮತ್ತು ಜಲಸಸ್ಯಗಳು ಯಾವುದೂ ಬೆಳೆಯುವುದಿಲ್ಲ .
6mg/l ದಾಟಿದರೆ ಜಲಚರಗಳ ಪ್ರಾಣಕ್ಕೆ ಕುತ್ತು.
2mg/l ದಾಟಿದರೆ ಮನುಷ್ಯನ ಉಪಯೋಗಕ್ಕೆ ಯೋಗ್ಯವಲ್ಲದ ನೀರು ಎಂದು ಹೇಳಲಾಗಿದೆ .
ಈಗ ಊಹಿಸಿ ಆ ನದಿಯ Bod ಎಷ್ಟು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ ಎಂದು .
ಈ ನದಿಯ ಸುತ್ತ ಆಹಾರಕ್ಕಾಗಿ ಅಡ್ಡಾಡುವ , ಅದೇ ನೀರನ್ನು ಕುಡಿಯುವ , ಆ ನೀರಿನಲ್ಲಿ ಈಜಾಡುವ , ಹೊರಳಾಡುವ ನಾಯಿಗಳ ಚರ್ಮ ಆಕಾಶ ನೀಲಿ ಬಣ್ಣಕ್ಕೆ ಬದಲಾಗಿದೆ .
ಈ ನಾಯಿಗಳಲ್ಲಿ ತುರಿಕೆ , ಕಣ್ಣಿನ infections , ಮತ್ತೆ ಆ ಗಾಯಗಳನ್ನು ಕೆರೆದುಕೊಂಡು ವಿಷ ಹೊಟ್ಟೆಗೂ ಸೇರುತ್ತಿವೆ .
ಇದು ಬರಿಯ ನಾಯಿಯ ಕಥೆಯಷ್ಟೇ ಹಕ್ಕಿ ಹಾವು , ಹುಳ , ನಮ್ಮ ಜೊತೆಗೆ ಮೂಕಪ್ರಾಣಿಗಳೂ ಒದ್ದಾಡ್ತಾ ಇರೋದು ನಿಜಕ್ಕೂ ಬೇಜಾರು ತರಿಸುತ್ತೆ..
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ