ವಿಷಯಕ್ಕೆ ಹೋಗಿ

ಆಷಾಢ

ಮುಗಿಯಲೊಲ್ಲದ ಆಷಾಢ

ಸಾಲು ದೀಪದ ಕುಡಿಯು ತುಡಿಯುವುದು ನಿನಗಾಗಿ 
ನಿನ್ನ ಕನವರಿಕೆಯ ಸುಳಿಯ ನಡುವೆ.. ದೀಪವಾರಿಸೋ ಇರುಳ ಒಳ ಉಸಿರು ಸುಮ್ಮನೇ  ತೋಳಲ್ಲಿ ನನ್ನ ಬಳಸು..
ಈ ಎಲ್ಲ ಹಂಬಲ ಎಷ್ಟು ಎಳಸು

ನಿಟ್ಟುಸಿರಿಗಿಲ್ಲಿ ತುಯ್ಯುತಿದೆ ದೀಪ 
 ಕಣ್ಣ ಕವಿತೆ ಓದುವ ನೀ ಬರುವಷ್ಟರಲೇ
 ದೀಪವಾರಿಸಿ ಬಿಡಬಹುದು ತಂಗಾಳಿ 
ನೆಪ ಹುಡುಕಿ ಮಾತು ಮರೆಸಿ
ರೆಪ್ಪೆಯ ಆಯದಲಿ ಮಲಗಿಸಿಬಿಡು 
ಜಗತ್ತು ಹೊಟ್ಟೆ ಕಿಚ್ಚಿನಲಿ ಉರಿದು ಹೋಗಲಿ 

 ಕಿಡಿ ಹಾರುವುದೇ ನಿಕ್ಕಿ ಎಂದಮೇಲೆ  ಕುಡಿಹುಬ್ಬು ಹಾರಿಸಿ  ತೆಕ್ಕೆಗೆಳೆದುಕೊಳ್ಳೋದೂ ಅಪರಾಧವಲ್ಲ ಬಿಡು 
ನಿದ್ರಿಸದ ರಾತ್ರಿಗಳ ಹಿತದ ಮುಗುಳು

 ಇರುಳಿಂದ ಜಾರಿ ಕೆನ್ನೆ ಬಟ್ಟಲ ಒಲವ ಪಾಕದಲಿ ಬಿದ್ದ ಜಾ ಮೂನು
ರುಚಿನೋಡಲು ದಕ್ಕಿದ್ದು ಬೆರಳಿಗಂಟಿದ ಬೆರಗು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.