ವಿಷಯಕ್ಕೆ ಹೋಗಿ

ಶಿಕಾರಿ

ಕೃತಿ ; ಶಿಕಾರಿ

ನಾನು ಓದಿರುವ ಒಂದು ಚಂದದ ಕೃತಿ . ವಿಜ್ಞಾನದ ವಿದ್ಯಾರ್ಥಿ ಆದ ನನಗೆ ಇಷ್ಟ ಆಯ್ತು. ನನಗೆ ತೀರಾ ಗಂಭೀರ ಅನಿಸುವಂತ ಕೃತಿಗಳು ಆ ಕ್ಷಣಕೆ ರುಚಿಸದೇ  ಇದ್ದರೂ ಸಹ ಮುಗಿಸಲೇಬೇಕು ಎಂಬ ಜಿದ್ದಿನಿಂದ ಮುಗಿಸಿದೆ.

ಕಾದಂಬರಿಯ ಪಾತ್ರ ನಾಗಪ್ಪ . ಅವನ ಸ್ವಗತಗಳಲಿ ಕಟ್ಟಲ್ಪಟ್ಟಿದೆ ಕಾದಂಬರಿ.
ಶಿಕಾರಿ ಎಂದರೆ ಬೇಟೆ . ಇಲ್ಲಿ ಶಿಕಾರಿ ಮಾಡುವುದು ಯಾರು ? ಇಲ್ಲಿ ಶಿಕಾರಿಯ ಬಲಿಪಶು ಯಾರು ಎಂದು ಗ್ರಹಿಸುತ್ತಾ ಹೋದಾಗ ಕಾದಂಬರಿಯ ಒಂದೊಂದು ಓದಿಗೂ ಉತ್ತರಗಳು ಬದಲಾಗುತ್ತವೆ‌ .

ಉದ್ಯೋಗದ ಜಗತ್ತಿನಲ್ಲಿ ಮುಂದುವರಿಯಲು ಎಂತಹಾ  ಅಸ್ತ್ರಗಳನ್ನು ಸಹ ಬಳಸುತ್ತಾರಲ್ಲಾ..ಅನಿಸುತ್ತದೆ.  ಹಗರಣ ಒಂದರಲ್ಲಿ ಸಿಲುಕಿಸಬೇಕೆಂಬ ಹುನ್ನಾರಕ್ಕೆ ಪ್ರಾಮಾಣಿಕ ನಾಗಪ್ಪ ಬಲಿಪಶು.

ಇಲ್ಲಿ ನಾಗಪ್ಪನೇ ಹೇಳುವಂತೆ , ಜೀವನ ಎಂದರೆ , ಜೀವವಿಕಾಸವಾದದ ಹೇಳಿಕೆ , ಅರ್ಹರಿಗೆ ಮಾತ್ರ ಬದುಕಲು ಹಕ್ಕು ( survival of the fittest ) ನ ಜೊತೆಗೆ , ದಿನ ನಿತ್ಯವೂ ನವೆಯುತ್ತಾ ಸಾಗುತಿರುವ  struggle for existence ಕೂಡ ಅನಿಸುತ್ತದೆ.

ಮತ್ತೊಮ್ಮೆ , ಈ survival of the fittest , ಅನ್ನೋದು ನಾಗಪ್ಪನ ಹತಾಷೆಯ ನುಡಿಗಳಾ ? ಎಂಬ ಸಂದೇಹ ಬರುತ್ತದೆ. ಈ ಸಾಲು ಕಾದಂಬರಿಯ ಮುಖ್ಯ ಸೂತ್ರ ಕೂಡ

ಕಾದಂಬರಿಯ ಮೊದಲಿಗೆ ನಾಗಪ್ಪನ ಮಾನಸಿಕ ಕ್ಲೇಷ , ಅವನ ತಳಮಳದಿಂದ ರಚಿತವಾಗಿದೆ ಅವನಲ್ಲಿ escapism ಕಂಡರೂ ನಂತರದ ಅರ್ಧ , ಜೀವನಪ್ರೀತಿ , ಛಲದ ಪ್ರತೀಕದ ಹಾಗೆ ಕಾಣುತ್ತಾನೆ.

ಮನುಷ್ಯ ಮನುಷ್ಯನ‌ ನಡುವೆ ಎದ್ದಿರುವ ಗೋಡೆಯ ಕೆಳಗೆ ಮಾನವೀಯತೆ ಸತ್ತಿದೆ ಎಂಬುದನ್ನು ಗುರುತಿಸಬಹುದು.
    ಅಂತರ್ವಿಮರ್ಶೆ ಮಾಡಿಕೊಳ್ಳಬೇಕಾದ ಕೃತಿ
ಸತ್ಯದ ಹುಡುಕಾಟ ಮಾಡಿಸುತ್ತಾ ಮಾಡಿಸುತ್ತಾ ನಮ್ಮ ಜೀವನದ ಅಧ್ವಾನಗಳನ್ನು ಬಿಚ್ಚಿಡುತ್ತೆ.

ಯಾಂತ್ರಿಕ ಜೀವನಶೈಲಿ , ಉನ್ನತಿಗೆ ಹಾತೊರೆಯುವ ಮನೋಭಾವ , ನಾನು ಬದುಕಬೇಕಾದರೆ ದುರ್ಬಲ ಸಾಯಲಿ , ಎನಿಸುವಂತೆ .ನಮ್ಮ ಭಾವನೆಗಳನ್ನು  , ಸ್ಪಂದಿಸುವ ಮನೋಭಾವವನ್ನು  , ಸಂವೇದನೆಯನ್ನು ಹತ್ತಿಕ್ಕಿದೆ ಎಂಬುದನ್ನು ಕಾದಂಬರಿ ತಿಳಿಸುತ್ತದೆ.

ಆತ್ಮಹತ್ಯೆ ಯ ಹಾದಿ ಹಿಡಿಯ ಹೊರಟಿದ್ದ ನಾಗಪ್ಪ ಕೊನೆಗೆ ಕೆಲಸದ ಜೊತೆಗೆ , ತನ್ನ ಜಂಜಡಗಳಿಗೂ , ಲೌಕಿಕ ತೊಳಲಾಟಕ್ಕೂ ಮುಕ್ತಿ ನೀಡಿ ಹೊಸದರತ್ತ ಸಾಗುವಲ್ಲಿ , ಕಾದಂಬರಿ ಕೊನೆಗೊಳ್ಳುತ್ತದೆ .

ಮಾನವೀಯತೆಯ ಅಗತ್ಯ , ತೀರಾ ಸ್ವಕೇಂದ್ರೀಕೃತ ಯೋಚನೆಗಳ ಪರಿಣಾಮದ ಬಗೆಗೆ , ಮನೋವೈಜ್ಞಾನಿಕ ನೆಲೆಯಲ್ಲಿ ಚಿತ್ರಿತಗೊಂಡಿದೆ.

ಕೊನೆಯಲ್ಲಿ ಇಲ್ಲಿ  ಮಾನವೀಯ ಮೌಲ್ಯಗಳು ಶಿಕಾರಿಯ ಬಲಿಪಶುಗಳು ಎಂದೂ ಅರ್ಥೈಸಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...