ವಿಷಯಕ್ಕೆ ಹೋಗಿ

ಶ್ರೀರಾಮಚಂದ್ರಂ ಭುವನಕೀಯಲಿ

ಶ್ರೀರಾಮಚಂದ್ರಂ ಭುವನಕೀಯಲಿ ನಿತ್ಯ ಕ್ಷೇಮವಂ||ಪ||

ಸಾಧು ಜನ ಲೋಕದೊಳ್ ಸಾಧಿತಾರ್ಥರಾಗಿರಲಿ ಆದಿ ವ್ಯಾಧಿ ದುರ್ಭಿಕ್ಷಂಗಳ ಬಾಧೆ ತಪ್ಪಲಿ ||ಅಪ||

ವರವರ್ಣಾಶ್ರಮ ಧರ್ಮಗಳ್ 
ಮೆರೆಯಲಿ ಸಂಪೂರ್ಣತೆಯಿಂ 
ಧರೆಯನಾಳದವ ನೃಪರು ಧರ್ಮದಿ ಪೊರೆಯಲೀ ಜನರ || ೧||

ಜನರೊಳೈಕಮತ್ಯಮಂ
 ವಿಮಲ ವಿದ್ಯಾ ವೈಭವವಂ 
ಅನಿಷಂ ಪೆರ್ಚುಗೆ ಹರಿಯಬಿಡದೇ
 ನೆನೆವ ಸುಮತಿಯ ||೨||

ಕುಮತಿ ನಷ್ಟವಾಗಲಿ 
ಸುಮ ಶರ ಜನ ಘನ ಕೃಪೆಯಿಂ 
ವಿಮಲಜ್ಞಾನ ಸೂರ್ಯನಿಂ ಭ್ರಮ ತಮವು ಪೋಗಲಿ ||೩||

ಬನಶಂಕರಿ ಸೋದರಂ ಘನಸಚ್ಚಿದಾನಂದಮಯಂ 
ಜನರ ದುರಿತಗಳನು ನೀಗಿ
 ಮನದಿ ನೆಲೆಸಲಿ ||೪||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...