ವಿಷಯಕ್ಕೆ ಹೋಗಿ

ಅವನಿಗಷ್ಟೇ ಕೇಳಿಸಬೇಕಾದ ಮಾತು "

"ಅವನಿಗಷ್ಟೇ ಕೇಳಿಸಬೇಕಾದ ಮಾತು "

ಸಾಗರದ ಅಲೆಯ ಕಪ್ಪೆಚಿಪ್ಪಿನ  ಮೇಲೆ ಮೀನ ಹೆಜ್ಜೆ ಹುಡುಕುವ ಹುಡುಗಾ ...

ಕ್ಯಾಡ್ಬರಿಯ ಕೋಮಲತೆ ನಿನ್ನ ಪ್ರತಿ ನಗೆಯೊಳಗೂ
ನನ್ನ ನೆನಪಿನ ಡಬ್ಬಿಯ ಸ್ವೀಟ್ ಮಿಲ್ಕೀ ಬಾರ್ ... 

ಹನಿ ಮಳೆಯ ಜರೀಲಂಗ ತೊಟ್ಟ  ಪುಟ್ಟ ಕನಸಿಗೆ
ಗಂಟೆ  ಒಂದಾದರೂ ಮುಗಿಯದ ಮಾತಿಗೆ
ಗಿರ್ರನೆ ತಿರುಗಿ ಕಮಲದಂತೆ ಕೂರುವ ಮುದ್ದು ಹುಡುಗಿಯ ಗೆಜ್ಜೆ ಸದ್ದನೇ ಎತ್ತಿಡುತ್ತೇನೆ

ನನ್ನ ಎದೆಯ ಕತ್ತಲೊಳಗಿನ
ಶೂನ್ಯ ಭಾವ ನೀನೇ
ಉರಿಯ ಕೂಸಿಗೆ ತಣ್ನೆಳಲ ಜೋಗುಳ
ನೀನು ,
ಬಯಲಿನ  ಬೆಳಕಿಗೆ ಅಂಚಿಲ್ಲ ನೋಡು , ಜಗದಗಲ ಬೆಳಕಿಗೆ ಬೊಗಸೆಯ ಸೀಮಿತ ..

ನಿನ್ನ ಕನ್ನಡಕದ ಕಣ್ಣೊಳಗೆ
ಮುಗಿಯದಿರುವ ಕೋಟಿ ಕನಸುಗಳಿಗೆ ಜೊತೆಯಾಗಿ ಬೆಚ್ಚಿಬಿದ್ದ ನಾನು ಮತ್ತು ಹೀಗೆ ಒಂದಷ್ಟು  ಅಬ್ಬೇಪಾರಿ ಪುಳಕಗಳು . ತಿಳಿಗತ್ತಲ ಸಂಜೆಯಲಿ ನೆನಪಾದ ತಾನಗಳು

ಮನದ ಪಿಸುಮಾತನು ಅರ್ಥ ಮಾಡಿಸಲು ಈಗ ಮೌನಕೆ  ಗಂಟು ಬಿದ್ದಿದ್ದೇನೆ 
ಗಡ್ಡದ ನಡುವೆ ಗುಳಿಕೆನ್ನೆ ನಕ್ಕ ಹಾಗೆ ಮಾತಿನೊಡನೆ ಈ ಮೌನದ ಅನುರಣನ

ಕೊನೆಗೂ  ಭಾವಗಳ ಜಡೆ ಹೆಣೆಯುತ್ತಾ  ಕಾಲವನ್ನ ಪೋಣಿಸಲು ಕುಳಿತಿದ್ದೇನೆ ಗಂಟೆ ಮೂರಾದರೂ ಮುಗಿಯದ ಮಾತಿಗೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...