ವಿಷಯಕ್ಕೆ ಹೋಗಿ

ಈ ನೆನಪುಗಳೇ ಹೀಗೆ..

ನೆನಪಿನ ಕಂತೆಯದು
ಬಿಚ್ಚಿದಷ್ಟೂ ಗೋಜಲು

ಅನುಭವಕೆ ಒಂದಷ್ಟು
ಫಸಲು
ಭಾವುಕತೆಗೆ ಒಂದಷ್ಟು
ನೆರಳು

ಮನಸೆಂಬ ಆಭರಣದ
ಹೊಳೆವ ಹರಳು
ಇದು ತಪ್ಪು ಇದು ಸರಿ
ಎಂದು ತಿಳಿಸಿ ತಿದ್ದುವ
ಕರುಳು
ಅದು ಅನುಭಾವದ
ಒರಳು

ನೆನಪಿನಾಳಕೆ ಇಳಿಯೇ
ಉಬ್ಬರಿಸುವುದು ಭಾವನೆಯ ಕಡಲು
    ನಾ ಅತ್ತು ಹಗುರಾಗೇ
   ಕಂಪಿಸೀತು ಅದರ
ಒಡಲು

  ಒಂದೆರಡು
ಕಣ್ಣಹನಿಗಳು
   ತುಟಿಯ
  ಮೇಲೊಂದಿಷ್ಟು ನಗು
ಹೊರಹೊಮ್ಮಲು
   ಸುಮಧುರ ಭಾವದಿರಿತ
   ಹಕ್ಕಿಯ
ಸವಿಗೊರಲು.

ಕಾವ್ಯ ಎಸ್ ಕೋಳಿವಾಡ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...