ವಿಷಯಕ್ಕೆ ಹೋಗಿ

ಸಮಾಧಿ .

ಸಮಾಧಿ ಕಟ್ಟಿ ಬಿಟ್ಟಿದ್ದೇನೆ
ನನ್ನೊಳಗಿನ ಕನಸುಗಳಿಗೆ
..-----------
ಮುದ್ದು ಕೂಸಿನ ತರದ
ಕನಸುಗಳವು
ಅದೆಷ್ಟು ಪ್ರೀತಿಸಿದ್ದೆ ಅವುಗಳನ್ನು

ಇಂದು ಪ್ರತಿಯೊಂದೂ
ಕಲ್ಲಿಗೆ ಕುಕ್ಕಿ  ಕೊಲೆಗೈಯಲ್ಪಟ್ಟಿವೆ...
ಕೊಲೆಗಡುಕರು ಯಾರೊ?? ಇನ್ನೂ ಸಿಕ್ಕಿಲ್ಲ

ನನ್ನ ಸತ್ತ ಕನಸುಗಳಿಗೆ ನಡೆಯುತಿದೆ  ಶ್ರಾದ್ಧ ದಿನವೂ
ಸಿಗುತ್ತಿದೆ ನಿತ್ಯವೂ ಕಣ್ಣೀರಿನ ತರ್ಪಣ
                        
ನಡಿಯುತಿದೆ ನಿತ್ಯವೂ  ಮೌನಾಚರಣೆ
ಮನಸಿನ ಬೇಗೆಯೆ ಕನಸುಗಳ ಸುಟ್ಟ ಚಿತಾಗ್ನಿ

ಕುವೆಂಪುರವರ ಕಂಸಶಿಲೆಯಂತಾಗಿದೆ ನನ್ನ
ಮನಸು 
ಮನವು ಕೂಗಿ ಕೂಗಿ ಅಳುತಲಿದೆ
"ಕನಸು ಕಾಣಬಾರದಾಗಿತ್ತೆ ನಾನು"
...????

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.