ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೀರಾಮಚಂದ್ರಂ ಭುವನಕೀಯಲಿ

ಶ್ರೀರಾಮಚಂದ್ರಂ ಭುವನಕೀಯಲಿ ನಿತ್ಯ ಕ್ಷೇಮವಂ||ಪ|| ಸಾಧು ಜನ ಲೋಕದೊಳ್ ಸಾಧಿತಾರ್ಥರಾಗಿರಲಿ ಆದಿ ವ್ಯಾಧಿ ದುರ್ಭಿಕ್ಷಂಗಳ ಬಾಧೆ ತಪ್ಪಲಿ ||ಅಪ|| ವರವರ್ಣಾಶ್ರಮ ಧರ್ಮಗಳ್  ಮೆರೆಯಲಿ ಸಂಪೂರ್ಣತೆಯಿಂ  ಧರೆಯನಾಳದವ ನೃಪರು ಧರ್ಮದಿ ಪೊರೆಯಲೀ ಜನರ || ೧|| ಜನರೊಳೈಕಮತ್ಯಮಂ  ವಿಮಲ ವಿದ್ಯಾ ವೈಭವವಂ  ಅನಿಷಂ ಪೆರ್ಚುಗೆ ಹರಿಯಬಿಡದೇ  ನೆನೆವ ಸುಮತಿಯ ||೨|| ಕುಮತಿ ನಷ್ಟವಾಗಲಿ  ಸುಮ ಶರ ಜನ ಘನ ಕೃಪೆಯಿಂ  ವಿಮಲಜ್ಞಾನ ಸೂರ್ಯನಿಂ ಭ್ರಮ ತಮವು ಪೋಗಲಿ ||೩|| ಬನಶಂಕರಿ ಸೋದರಂ ಘನಸಚ್ಚಿದಾನಂದಮಯಂ  ಜನರ ದುರಿತಗಳನು ನೀಗಿ  ಮನದಿ ನೆಲೆಸಲಿ ||೪||