ಶ್ರೀರಾಮಚಂದ್ರಂ ಭುವನಕೀಯಲಿ ನಿತ್ಯ ಕ್ಷೇಮವಂ||ಪ|| ಸಾಧು ಜನ ಲೋಕದೊಳ್ ಸಾಧಿತಾರ್ಥರಾಗಿರಲಿ ಆದಿ ವ್ಯಾಧಿ ದುರ್ಭಿಕ್ಷಂಗಳ ಬಾಧೆ ತಪ್ಪಲಿ ||ಅಪ|| ವರವರ್ಣಾಶ್ರಮ ಧರ್ಮಗಳ್ ಮೆರೆಯಲಿ ಸಂಪೂರ್ಣತೆಯಿಂ ಧರೆಯನಾಳದವ ನೃಪರು ಧರ್ಮದಿ ಪೊರೆಯಲೀ ಜನರ || ೧|| ಜನರೊಳೈಕಮತ್ಯಮಂ ವಿಮಲ ವಿದ್ಯಾ ವೈಭವವಂ ಅನಿಷಂ ಪೆರ್ಚುಗೆ ಹರಿಯಬಿಡದೇ ನೆನೆವ ಸುಮತಿಯ ||೨|| ಕುಮತಿ ನಷ್ಟವಾಗಲಿ ಸುಮ ಶರ ಜನ ಘನ ಕೃಪೆಯಿಂ ವಿಮಲಜ್ಞಾನ ಸೂರ್ಯನಿಂ ಭ್ರಮ ತಮವು ಪೋಗಲಿ ||೩|| ಬನಶಂಕರಿ ಸೋದರಂ ಘನಸಚ್ಚಿದಾನಂದಮಯಂ ಜನರ ದುರಿತಗಳನು ನೀಗಿ ಮನದಿ ನೆಲೆಸಲಿ ||೪||